Deprecated function: The each() function is deprecated. This message will be suppressed on further calls in menu_set_active_trail() (line 2396 of /home2/kagapjzt/public_html/bmshri.org/includes/menu.inc).
ಬಿ.ಎಂ.ಶ್ರೀ. ಪ್ರತಿಷ್ಠಾನಕ್ಕೆ ನಿಮಗೆ ಸುಸ್ವಾಗತ ...
"ದೇಶದಲ್ಲಿ ಹುಳು ತಿಂದುಹೋಗದೆ ಇರುವ ಗ್ರಂಥಗಳನ್ನೆಲ್ಲ ಶೇಖರಿಸಿ ಒಂದನ್ನೂ ಬಿಡದಂತೆ ಅಚ್ಚುಹಾಕುವುದು. ಅಚ್ಚಾದ ಮೇಲೆ ಎಲ್ಲವನ್ನೂ ಕೊನೆಮುಟ್ಟಿ ಶೋಧಿಸಿ ಹೊಸದಾಗಿ ಲಕ್ಷಣ ಗ್ರಂಥಗಳನ್ನು ಕಾಲಕ್ಕೆ ತಕ್ಕಂತೆ ರಚಿಸುವುದು." ಇದು ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು 1911ರಲ್ಲೇ ನುಡಿದ ವಾಣಿ. ಇದನ್ನೇ ಧ್ಯೇಯವಾಗಿಸಿಕೊಂಡು ಇದರ ಜೊತೆಗೆ ಸಂಶೋಧನ ಕ್ಷೇತ್ರಗಳಲ್ಲಿ ಅಳಿಸಿಹೋಗುತ್ತಿರುವ ಇತರ ಪೂರಕ ಸಂಶೋಧಕ ಪ್ರವೃತ್ತಿಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಆಚಾರ್ಯರ ಹೆಸರಿನಲ್ಲಿ, ಈ ಸಂಸ್ಥೆಯನ್ನು 1979 ರಲ್ಲಿ ಪ್ರೊ. ಎಂ.ವಿ. ಸೀತಾರಾಮಯ್ಯನವರು ಸ್ಥಾಪಿಸಿದ್ದು ರಾಷ್ಟ್ರಕವಿ ಕುವೆಂಪುರವರಿಂದ ಉದ್ಘಾಟನೆಯಾಗಿದೆ. ಯಶಸ್ವೀ 34 ವರ್ಷಗಳನ್ನು ಪೂರೈಸಿ 2004ರಲ್ಲಿ ರಜತೋತ್ಸವವನ್ನು ಆಚರಿಸಿದೆ.
ಈಗಾಗಲೇ ಸಂಸ್ಥೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಕರ್ನಾಟಕದಲ್ಲಿ ಸಂಶೋಧನೆ ಮತ್ತು ಪಾಂಡಿತ್ಯ ಸಂವರ್ಧನೆಗಳಿಗೆ ವೀಸಲಾದ ಪ್ರತಿಷ್ಠತ ಸಂಶೋಧನ ಕೇಂದ್ರವಾಗಿದೆ. ಈವರೆಗೆ ಸುಮಾರು 75 ಪ್ರಕಟಣೆಗಳನ್ನು ಹೊರತಂದಿದೆ. ಸಂಶೋಧನ ಕಾರ್ಯಕ್ಕೆ ಅನುಕೂಲವಾಗುವಂತೆ ಹದಿನೈದು ಸಾವಿರಕ್ಕೂ ಅಧಿಕ ಅಮೂಲ್ಯ ಗ್ರಂಥಗಳ ಆಕರ ಗ್ರಂಥಾಲಯವನ್ನೂ ಸುಮಾರು ಮೂರು ಸಾವಿರಕ್ಕೂ ಅಧಿಕ ಪ್ರಾಚೀನ ಓಲೆಗರಿ, ಕಾಗದದ ಹಸ್ತಪ್ರತಿಗಳ ಭಂಡಾರವನ್ನೂ ಹೊಂದಿರುವ ಪ್ರತಿಷ್ಠಾನ ಸದಸ್ಯರು, ಉದಾರ ದಾನಿಗಳು ಮತ್ತು ಅಭಿಮಾನಿಗಳಿಂದಲೇ ಬೆಳೆಯುತ್ತಿದೆ.